ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ತೆಕ್ಕಟ್ಟೆ : ಚಂದ್ರಕಲಾ ಯಕ್ಷೊತ್ಸವ ಸಮಾರೋಪ, ಅಭಿನಂದನೆ ಮತ್ತು ಗುರುವಂದನೆ

ಲೇಖಕರು :
ಕೋಟ ಸುದರ್ಶನ ಉರಾಳ
ಗುರುವಾರ, ಫೆಬ್ರವರಿ 25 , 2016
ಫೆಬ್ರವರಿ 23, 2016

ತೆಕ್ಕಟ್ಟೆ : ಚಂದ್ರಕಲಾ ಯಕ್ಷೊತ್ಸವ ಸಮಾರೋಪ, ಅಭಿನಂದನೆ ಮತ್ತು ಗುರುವಂದನೆ

ತೆಕ್ಕಟ್ಟೆ : 24-2-2016 ರಂದು ತೆಕ್ಕಟ್ಟೆ ಕೊಮೆಯ ಹೆಗ್ಡೆಕೆರೆ ಬೊಬ್ಬರ್ಯ ದೈವಸ್ಥಾನದ ಪ್ರಾಂಗಣದಲ್ಲಿ ಯಶಸ್ವಿ ಕಲಾವೃಂದ (ರಿ. ) ಕೊಮೆ, ತೆಕ್ಕಟ್ಟೆ ಇದರ 2015-16ನೇ ಸಾಲಿನ ಚಂದ್ರಕಲಾ ಯಕ್ಷೊತ್ಸವದ ಸಮಾರೋಪ ಮತ್ತು ಚಿತ್ರಕಲೆ ಗುರುಗಳಾದ ಗಿರೀಶ್ ವಕ್ವಾಡಿ, ಸುಗಮ ಸಂಗೀತ ಗುರುಗಳಾದ ಶ್ರೀಮತಿ ಶಾರದಾ ಹೊಳ್ಳ, ತಬಲಾ ಗುರುಗಳಾದ ಶ್ರೀ ಹರಿದಾಸ್ ಪೈ ಬ್ರಹ್ಮಾವರ, ಯೋಗ ಗುರುಗಳಾದ ನಾರಾಯಣ ಮೈಯ್ಯ, ಕರಾಟೆ ಗುರುಗಳಾದ ವಿ. ಸುಂದರಂ, ಭರತನಾಟ್ಯ ಗುರುಗಳಾದ ಶ್ರೀಮತಿ ಶ್ರೀವಿದ್ಯಾ ಉಡುಪಿ, ಯಕ್ಷಗಾನ ಭಾಗವತಿಕೆಯ ಗುರುಗಳಾದ ಕೆ. ಪಿ. ಹೆಗಡೆ, ಮದ್ದಲೆ-ಚಂಡೆ ಗುರುಗಳಾದ ದೇವದಾಸ್ ಕೂಡ್ಲಿ, ಯಕ್ಷ ನೃತ್ಯ ಗುರುಗಳಾದ ಕೊಕೂರು ಸೀತಾರಾಮ ಶೆಟ್ಟಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ ಸಿ. ಕುಂದರ್ ಮತ್ತು ಗೀತಾನಂದ ಫೌಂಡೇಷನ್ ಟ್ರಸ್ಟಿಗಳಾದ ಗೀತಾ ಏ. ಕುಂದರ್ ರವರನ್ನು ಅಭಿನಂದನೆಯನ್ನು ಮಾಡಲಾಯಿತು.

ಅಂದು ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಪ್ರೇಮಾನಂದ ಶೆಟ್ಟಿಯವರು ಯಶಸ್ವಿ ಕಾರ್ಯಕ್ರಮ ನಡೆಸುವ ಯಶಸ್ವಿ ಕಲಾವೃಂದದವರಿಗೆ ವಂದಿಸುತ್ತಾ ಹಾಲಿನೊಳಗಿರುವ ಬೆಣ್ಣೆಯಂತೆ, ಬೀಜದೊಳಗಿರುವ ಎಣ್ಣೆಯಂತೆ ತೆರೆಯ ಹಿಂದೆ ತುಂಬಾ ಕೆಲಸ ಮಾಡುತ್ತಿರುವ ಸಂಸ್ಥೆ ಇದಾಗಿದೆ. ಇಂದು ಎಲ್ಲಾ ಪ್ರಕಾರದ ಕಾರ್ಯಕ್ರಮ ನಡೆಯಿತು. ಶಾಲಾ-ಕಾಲೇಜುಗಳಲ್ಲಿ ಬಿಟ್ಟರೆ ಒಂದು ಸಂಘ, ಸಂಸ್ಥೆಯಲ್ಲಿ ಮೊದಲ ಬಾರಿಗೆ ಈ ತರದ ಕಾರ್ಯಕ್ರಮ ನೋಡುತ್ತಿದ್ದೇನೆ ಎಂದು ಹೇಳಿದರು.

ಅಭಿನಂದನೆ ಪಡೆದ ಆನಂದ ಸಿ. ಕುಂದರ್ ರವರು ಮಾತನಾಡಿ ಯಶಸ್ವಿ ಕಲಾವೃಂದವು ಕಳೆದ 10 ವರ್ಷಗಳಿಂದ ಬಹಳ ಚಟುವಟಿಕೆ ಮಾಡಿದೆ. ಯಕ್ಷಗಾನಕ್ಕೆ ತುಂಬಾ ಹುಮ್ಮಸ್ಸು ಕೊಡುತ್ತಾ ಇರುವುದು ಹೆಮ್ಮೆ ಎನಿಸುತ್ತದೆ.

ನಮ್ಮ ಶ್ರೀಮಂತ ಕಲೆ ಓದು ಬರಹ ತಿಳಿಯದ ಜನರಿಗೆ ರಾಮಾಯಣ, ಮಹಾಭಾರತ, ಭಾಗವತದ ಕತೆಗಳಲ್ಲಿ ಅಡಕವಾಗಿರುವ ಉದಾತ್ತ ತತ್ವಗಳನ್ನು ತಿಳಿಯ ಪಡಿಸಿದ ಕಲೆಯಾಗಿದೆ. ಯಾವುದೇ ಕಲೆಯಾಗಲೀ ತನ್ನ ಪರಿಣಾಮವನ್ನು ಪ್ರೇಕ್ಷಕರ ಮೇಲೆ ಬೀರ ಬೇಕಾದರೆ ಅಂತಹ ಕಲೆಯಲ್ಲಿ ಕ್ರಿಯೆಗಳು ಮಿತವಾಗಿ ಅರ್ಥ ವ್ಯಾಪ್ತಿ, ಮೌಲ್ಯ ಹೆಚ್ಚಬೇಕು. ಆಗ ಕಲೆಯ ಪರಿಣಾಮ ಹೆಚ್ಚಾಗುತ್ತದೆ. ಇಂದು ಮೇಳಗಳಲ್ಲಿ ನುರಿತ ಕಲಾವಿದರ ಕೊರತೆ ತುಂಬಾ ಇದೆ. ಇಂಥಹ ಯಕ್ಷಗಾನ ತರಗತಿಯಿಂದ ಕಲಾವಿದರ ಕೊರತೆಯನ್ನು ನೀಗಿಸಬಹುದು ಎಂದರು.

ಹಾಗೆ ವೇದಿಕೆಯಲ್ಲಿ ಜ್ಯೋತಿಷ್ಯರಾದ ರಮೇಶ್ ರಾವ್, ಶನೈಶ್ಚರ ದೇವಸ್ಥಾನ ಆಡಳಿತ ಮುಕ್ತೇಶರರಾದ ಬಸವ ಪೂಜಾರಿ, ಅಭಿಮಾನ್ ಯುವಕ ಮಂಡಲದ ಅಧ್ಯಕ್ಷರಾದ ರಾಜು ಪೂಜಾರಿ, ಶ್ರೀಮತಿ ಗೀತಾ ಏ. ಕುಂದರ್, ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು ಕೊಕೂರು ಸೀತಾರಾಮ ಶೆಟ್ಟಿಯವರು ಉಪಸ್ಥಿತರಿದ್ದರು. ಹೆರಿಯ ಮಾಸ್ತರ್ ವರದಿ ವಾಚನ ಮಾಡಿದರು. ಸೀತಾರಾಮ ಶೆಟ್ಟಿ ಕೆ. ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು ಸುಜಯೀಂದ್ರ ಹಂದೆ ನಿರ್ವಹಿಸಿದರು. ಕಾರ್ಯಕ್ರಮದ ಮೊದಲು ತರಗತಿ ವಿದ್ಯಾರ್ಥಿಗಳಿಂದ ಚಿತ್ರ ಕುಂಚ ಪ್ರದರ್ಶನ ಪ್ರದರ್ಶನ, ಸುಗಮ ಸಂಗೀತ, ತಬಲಾ-ಹರ್ಮೋನಿಯಂ ಜುಗಲ್ ಬಂದಿ, ಯೋಗ ವಿಹಾರ, ಕರಾಟೆ ರಿಯು ಶೋ, ಭರತನಾಟ್ಯ, ಕಾರ್ಯಕ್ರಮ ನಡೆಯಿತು. ನಂತರ ಯಕ್ಷಗಾನದಲ್ಲಿ ನವ ಭಾಗವರ ರಂಗಪ್ರವೇಷ ಮತ್ತು ಯಶಸ್ವಿ ಮಕ್ಕಳ ಮೇಳದ ಕಲಾವಿದರಿಂದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಿತು.










Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ